ಅಪಾರ ನೋವಿನ ನಡುವೆಯೂ ಸರ್ಕಾರಕ್ಕೆ ಪತ್ರ ಬರೆದ, ಅಶ್ವಿನಿ ಪುನೀತ್ ರಾಜಕುಮಾರ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಭಾರದ ಲೋಕ ಕ್ಕೆ ತೆರಳಿ ಇಂದಿಗೆ 12 ದಿನ ಕಳೆದರು ಕೂಡ ಅಪ್ಪುವಿನ ಅಗಲಿಕೆಯ ನೋವು ಮಾತ್ರ ಲಕ್ಷಾಂತರ ಅಭಿಮಾನಿಗಳ ಜೊತೆಗೆ ಅವರ ಕುಟುಂಬ ವರ್ಗದವರಿಗು ಕೂಡ ಅರಗಿಸಲಾಗದಷ್ಟು ನೋವು ಉಂಟುಮಾಡಿದ್ದು, ಆ ನೋವಿನ ನಡುವೆಯೂ ಪುನಿತ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ ಅವರು ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರಿಗೆ ಬರೆದ ಪತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ.
ಅಪ್ಪು ನಿಧನದ ನಂತರ ಇದುವರೆಗೂ ಅಶ್ವಿನಿ ಅವರು ಯಾವುದೇ ಒಂದು ಮಾತನ್ನು ಆಡಿಲ್ಲ, ಈ ಆಘಾತದ ನಡುವೆಯೂ ಕೂಡ ಅಪ್ಪು ನಿಧನದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರವು ಅಚ್ಚುಕಟ್ಟಾಗಿ ನಿಭಾಯಿಸಿರುವುದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರ ಕೈಗೊಂಡ ಕ್ರಮಕ್ಕೆ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ.


ಪುನೀತ್ ಅವರು ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದು, ಅವರ ನೋವನ್ನು ಮನಸ್ಸಿನಿನಲ್ಲಿ ಇಟ್ಟುಕೊಂಡು ಅವರನ್ನು ಸಕಲ ಗೌರವ ಗಳೊಂದಿಗೆ ಕಳುಹಿಸಿಕೊಡುವುದು ಅನಿವಾರ್ಯ ವಾಗಿತ್ತು, 3 ದಿನಗಳ ಕಾಲ ನಮ್ಮ ಬೆಂಬಲ ವಾಗಿ ನಿಂತು ಅವರಿಗೆ ಸೂಕ್ತವಾದ ವಿದಾಯ ಹೇಳಲು ನಿಮ್ಮ ಸಹಕಾರ ಮುಖ್ಯ ವಾಗಿದ್ದು, ಆ ಕರ್ತವ್ಯ ವನ್ನು ನೀವು ನಿಭಾಯಿಸಿದ್ದಕ್ಕಾಗಿ ಈಡೀ ಕುಟುಂಬ ಜೊತೆಗೆ ಅಭಿಮಾನಿಗಳ ಪರವಾಗಿ ನಿಮಗೆ ಕೃತಜ್ಞತೆ ಸಲ್ಲಿಸಿರುವದಾಗಿ ಅಶ್ವಿನಿ ಪುನೀತ್ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Share this Article
error: Content is protected !!