ಅಂಜನಾದ್ರಿ ಬೆಟ್ಟದಲ್ಲಿ ಅತುಲ್ ಕುಮಾರನ ಅವಿವೇಕಿತನ, ಪ್ರಕರಣ ದಾಖಲು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಗಂಗಾವತಿ: ಕೋಮು ಸೌಹಾರ್ದತೆಗೆ ಹೆಸರಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಶಾಂತಿ ಸುವ್ಯವಸ್ಥೆ ಗೆ ಭಂಗ ತರಲು ಯತ್ನಿಸಿದ ವ್ಯಕ್ತಿಯೊಬ್ಬನ ವಿರುದ್ದ ಗಂಗಾವತಿ ತಹಶಿಲ್ದಾರ ಯು ನಾಗರಾಜ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆ ವ್ಯಕ್ತಿಯನ್ನು ಮಧುಗಿರಿ ಮೂಲದ ಅತುಲ್ ಕುಮಾರ ಸಬರವಾಲಾ ಎಂದು ಗುರುತಿಸಲಾಗಿದೆ.

ವಿಶ್ವವಿಖ್ಯಾತ ಅಂಜನಾದ್ರಿ ಬೆಟ್ಟದ ಪ್ರವೇಶ ದ್ವಾರದ ಬಳಿ ನಿಂತು ನಾನು ಮೋದಿ ಅಭಿಮಾನಿಯೆಂದು ಉಚ್ಚಾಟ ನಡೆಸಿ ಮುಸ್ಲಿಂ ರ ಬಗ್ಗೆ ಅವಹೇಳನ ಕಾರಿ ಮಾತನಾಡಿದ ವಿಡಿಯೋ ವೊಂದನ್ನು ಹಿಂದು ಸಾಮ್ರಾಟ ಧರ್ಮಸೇನೆ ಫೇಸ್‌ಬುಕ್‌ ಖಾತೆಯ ಲೈವನಲ್ಲಿ ಕೂಗಾಡಿದ್ದಲ್ಲದೇ ಜಿಲ್ಲಾಧಿಕಾರಿಗಳ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಮಾತನಾಡಿದ್ದಾನೆ. ಸುದ್ದಿ ತಿಳಿಯುತಿದ್ದಂತೆಯೇ ಗಂಗಾವತಿ ತಹಶಿಲ್ದಾರ ಯು ನಾಗರಾಜ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಪರೀಶಿಲಿಸುವಷ್ಟರಲ್ಲಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.

Share this Article
error: Content is protected !!