ತಾವರಗೇರಾ: ಸರ್ಕಾರಿ ಜಮೀನು ಕಂಡವರ ಪಾಲು, ತನಿಖೆಗೆ ಒತ್ತಾಯ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ಸರ್ಕಾರಿ ಜಮೀನು (ಗಾಂವಠಾಣ) ಜಾಗವನ್ನು ಕೆಲೆ ಪಟ್ಟ ಬದ್ರಹಿತಾಸಕ್ತಿಗಳ ಪಾಲಾಗುತ್ತಿದ್ದು ತನಿಖೆ ಕೈಗೊಂಡು ಸಂಭಂದಿಸಿದ ಇಲಾಖೆಯವರು ವಶಪಡಿಸಿಕೊಳ್ಳ ಬೇಕೆಂದು ಒತ್ತಾಯಿಸಿ ಪಟ್ಟಣದ ಪ್ರಗತಿಪರ ಸಂಘಟನೆಗೆಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ಸರ್ವೆ ನಂ 54 ರಲ್ಲಿ 18 ಎಕರೆ 36 ಗುಂಟೆ ಜಮೀನಿನ ಜೊತೆಗೆ ಗಾಂವಠಾಣ ಜಮಿನು ಇರುವದರಿಂದ, ಇದನ್ನೆ ಬಳಸಿಕೊಂಡ ಕೆಲವರು ಈಗಾಗಲೆ ಅತೀಕ್ರಮಿಸಿಕೊಂಡಿದ್ದು ಈ ಕುರಿತು ಹಲವು ಬಾರಿ ಪಟ್ಟಣಪಂಚಾಯತ ಗಮನಕ್ಕೆ ತಂದಿದ್ದರೂ ಕೂಡ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.


ಈ ಸಂಧರ್ಬದಲ್ಲಿ ವೇಲ್ಪೇರ್ ಪಾರ್ಟಿ ಆಫ್ ಇಂಡಿಯಾ ಹೋಬಳಿ ಅಧ್ಯಕ್ಷ ಯಮನೂರಪ್ಪ ಬಿಳೇಗುಡ್ಡ, ದಲಿತ ಮುಖಂಡ ಆನಂದ ಭಂಡಾರಿ, ರಾಜಾ ನಾಯಕ, ಕರ್ನಾಟಕ ನವನಿರ್ಮಾಣ ಸೇನೆ ತಾಲೂಕ ಅಧ್ಯಕ್ಷ ಶಾಮೂರ್ತಿ ಅಂಚಿ, ಶಾಮ ದಾಸನೂರ, ಮಂಜುನಾಥ ಎಸ್ ಕೆ, ಆರ್ ಬಿ ಅಲಿ ಆದಿಲ್ ಚಂದ್ರು ಸಿ ಎಮ್, ಅಂಬಣ್ಣ ಕಲಾಲ, ರಮೇಶ ಗದ್ದಿ, ಸಂಗಪ್ಪ ಸುಣಗಾರ, ನಾಗೇಶ ಹುನಗುಂದ, ಶರಣಪ್ಪ ಕಲಾಲ ಇನ್ನೀತರರಿದ್ದರು

Share this Article
error: Content is protected !!