ತಾವರಗೇರಾ: ಉರುಸ್ ರದ್ದು, ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸ್ಥಳೀಯ ಠಾಣೆಯಲ್ಲಿ ಶ್ರೀ ಶಾಮೀದ್ ಅಲಿ ಉರುಸ್ ಅಂಗವಾಗಿ ಶಾಂತಿ ಸಭೆ ಕರೆಯಲಾಗಿತ್ತು, ಈ ಸಂಧರ್ಬದಲ್ಲಿ ಉದ್ಯಮಿ ಬಸನಗೌಡ ಮಾಲಿ ಪಾಟೀಲ್ ಮಾತನಾಡಿ ಪ್ರತಿವರ್ಷದಂತೆ ನಡೆಯಬೇಕಾಗಿದ್ದ ಉರುಸ್ ಕೋವಿಡ್ ನಿಯಮಾನುಸಾರ ಈ ವರ್ಷವೂ ಕೂಡ ರದ್ದುಪಡಿಸಲಾಗಿದೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ನಂತರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಶಂಕರ್ ಡಿ ಕಾಳೆ ಮಾತನಾಡಿ ಯಾವುದೇ ಕಾರಣಕ್ಕು ದರ್ಗಾಗಳಲ್ಲಿ ಪೂಜೆ ಸಲ್ಲಿಸುವದಕ್ಕೆ ಅವಕಾಶ ನೀಡಲಾಗುವದಿಲ್ಲ ಜಿಲ್ಲಾಧಿಕಾರಿಗಳ ಆದೇಶದಂತೆ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

ನಂತರ ಪಪಂ ಸದಸ್ಯ ಚಂದ್ರಶೇಖರ್ ನಾಲತವಾಡ, ಸ್ಥಳೀಯ ಪ್ರಭಾರ ಠಾಣಾಧಿಕಾರಿ ಮಲ್ಲಪ್ಪ ವಜ್ರದ ಸಭೆಯಲ್ಲಿ ಮಾತನಾಡಿದರು.
ಈ ಸಂಧರ್ಬದಲ್ಲಿ ಕಂದಾಯ ಇಲಾಖೆ ಅಧಿಕಾರಿ ಸೂರ್ಯಕಾಂತ ದೇಸಾಯಿ, ಹಾಗೂ ಎರಡು ದರ್ಗಾದ ಮುಜಾವರಗಳು ಮತ್ತು ಪಟ್ಟಣದ ವಿವಿಧ ಸಮಾಜದ ಮುಖಂಡರುಗಳು ಪಾಲ್ಗೊಂಡಿದ್ದರು.
ಪೋಲಿಸ್ ಸಿಬ್ಬಂದಿ ಗುಂಡಪ್ಪ ಸ್ವಾಗತಿಸಿದರು, ಹನುಮಗೌಡ ವಂದಿಸಿದರು, ಬಸವರಾಜ ಇಂಗಳದಾಳ ನಿರೂಪಿಸಿದರು.

Share this Article
error: Content is protected !!