ತಾವರಗೇರಾ: ರೈತರಿಗೆ ಮಾಸ್ಕ್ ಹಾಗೂ ಚಾಲಕರಿಗೆ ಆಹಾರ ಪೊಟ್ಟಣ ವಿತರಣೆ..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ವಿವಿಧ ಸಂಘಸಂಸ್ಥೆಗಳ ಸದಸ್ಯರಿಂದ ಆಹಾರ ಪೊಟ್ಟಣ, ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.
ಪಟ್ಟಣದ ಗೆಳೆಯರ ಬಳಗದ ವತಿಯಿಂದ ಪೊಲೀಸ್ ರಿಗೆ ಮತ್ತು ಗೃಹ ರಕ್ಷಕದಳದವರಿಗೆ, ವಾಹನ ಚಾಲಕರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ರವಿ ಹೂಗಾರ, ಶಾಮ್ ಭಂಗಿ, ಪ್ರದಿಪ್ ಪೂಡೂರ, ಶಾಮೂರ್ತಿ ಓಲೇಕಾರ, ಹನುಮಾನ ಸಿಂಗ್, ಮುಸ್ತಫಾ, ಸೇರಿದಂತೆ ಇನ್ನಿತರರಿದ್ದರು.

ಯೂತ್ ಕಾಂಗ್ರೆಸ್ ವತಿಯಿಂದ : ಬೀಜ ಗೊಬ್ಬರ ಖರೀದಿ ಮಾಡಲು ಬಂದ ರೈತರಿಗೆ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಮುಖಂಡರಾದ ಅಮರೇಶ ಕುಂಬಾರ, ಫಯಾಜ ಬನ್ನು, ಮಹಾಂತೇಶ ಬಂಡೇರ, ಪವನ, ಸಂಗಮೇಶ, ಮುದುಕಪ್ಪ ದುಂಬಾಲಿ ಸೇರಿದಂತೆ ಇನ್ನಿತರರಿದ್ದರು.

Share this Article
error: Content is protected !!