ಕಳಚಿತು ಕೊಪ್ಪಳದ “ಹೊಸದಿಗಂತ”ದ ಕೊಂಡಿ, ಮರೆಯಾದ ತಿಪ್ಪನಗೌಡ ಪಾಟೀಲ್ ಬಿಕನಹಳ್ಳಿ..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ: ಮಹಾಮಾರಿ ಕರೊನಾಗೆ ಹೊಸದಿಗಂತ ಪತ್ರಿಕೆಯ ಜಿಲ್ಲಾ ವರದಿಗಾರರಾಗಿದ್ದ ತಿಪ್ಪನಗೌಡ ಪಾಟೀಲ್ ಬಿಕನಹಳ್ಳಿ ಬಲಿಯಾಗಿರುವುದು ದುರಂತ ಜೊತೆಗೆ ಕ್ರಿಯಾಶೀಲ ಸ್ನೇಹ ಜೀವಿಯಾಗಿದ್ದ ತಿಪ್ಪನಗೌಡ ಪಾಟೀಲ್ ಅವರು ಹೊಸದಿಗಂತದ ಗೌಡರೆಂದೆ ಚಿರಪರಿಚಿತರಾಗಿದ್ದ, ಪತ್ರಿಕೆ ಹೆಸರಿನ ಜೊತೆಗೆ ಗೌಡ್ರು ಅಂತ ಕರೆಯುವುದು ವಾಡಿಕೆ. ಹೊಸದಿಗಂತ ಪತ್ರಿಕೆ ಅಂದರೆ ನಮ್ಮ ತಿಪ್ಪನಗೌಡ್ರಗೆ ಅಂದರೆ ಅಷ್ಟೇ ಅಚ್ಚು ಮೆಚ್ಚು ಕೂಡ.

ಪತ್ರಿಕೆಯನ್ನು ಅಷ್ಟು ಇಷ್ಟ ಪಡುತ್ತಿದ್ದ ಗೌಡ್ರನ್ನು ಬಲಿ ಪಡೆದ ಕ್ರೂರಿ ಕರೊನಾ..!
ಕೊಪ್ಪಳದ ಬಹುತೇಕ ಪತ್ರಕರ್ತರು ಗೌಡ್ರ ಮನೆಯಲ್ಲಿ ಸವಿ ಭೋಜನ ಮಾಡಿದ್ದುಂಟು, ಗೆಳೆಯರಾದರೇ ಸಾಕು ಅವರನ್ನು ಮನೆಗೆ ಕರೆದು ಊಟ ಮಾಡಿಸಿ, ಪ್ರಿತಿಗೆ ಪಾತ್ರರಾಗುವುದು ಇವರ ಹುಟ್ಟು ಗುಣ.

ಇಬ್ಬರು ಪುತ್ರರು ಹಾಗೂ ಪತ್ನಿ ಯನ್ನು ಮತ್ತು ಅಪಾರ ಪ್ರಮಾಣದ ಪತ್ರಿಕಾ ಗೆಳೆಯರನ್ನು ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ಗೌಡರಿಗೆ ಕೊಪ್ಪಳ ಜಿಲ್ಲೆಯ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ.

Share this Article
error: Content is protected !!