ಆಸ್ತಿಗಾಗಿ ಅಣ್ಣ ತಮ್ಮಂದಿರ ಜಗಳ, ಕೊಲೆಯಲ್ಲಿ ಅಂತ್ಯ..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ, ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಆಸ್ತಿಯ ಸಲುವಾಗಿ ಅಣ್ಣ ತಮ್ಮಂದಿರ ಮದ್ಯ ನಡೆದ ಗಲಾಟೆಯಲ್ಲಿ ಒಬ್ಬ ವ್ಯಕ್ತಿ ಕೊಲೆಯಾಗಿ ಮತ್ತೊಬ್ಬ ವ್ಯಕ್ತಿ ತೀವ್ರ ವಾಗಿ ಗಾಯಗೊಂಡ ಘಟನೆ ಹನುಮಸಾಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯಮನಪ್ಪ ತಿಪ್ಪಣ್ಣ ಹುಗ್ಗಿ(33) ಎಂಬಾತ ಕೊಲೆಯಾದ ವ್ಯಕ್ತಿ, ಇನ್ನೊಬ್ಬ ಸಹೋದರ ದ್ಯಾಮಪ್ಪ ತಿಪ್ಪಣ್ಣ ಹುಗ್ಗಿ ತೀವ್ರ ಗಾಯಗೊಂಡಿದ್ದಾನೆ.
ತಮ್ಮ 10 ಎಕರೆ ಜಮೀನು ಸಂಬಂಧ ಸಹೋದರ ಕುಟುಂಬಗಳ ಮದ್ಯೆ ನಡೆದ ಜಗಳದಲ್ಲಿ ಯಮನಪ್ಪ ತಿಪ್ಪಣ್ಣ ಹುಗ್ಗಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದು. ದ್ಯಾಮಪ್ಪ ತಿಪ್ಪಣ್ಣ ಹುಗ್ಗಿಯನ್ನು ಎತ್ತಿನ ಬಂಡಿಗೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ತೀವ್ರಗಾಯಗೊಂಡ ದ್ಯಾವಪ್ಪನನ್ನು ಬಾಗಲಕೋಟೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಿಕೊಡಲಾಗಿದೆ.
ಪ್ರಕರಣ ಕ್ಕೆ ಸಂಬಂಧಿಸಿದಂತೆ ಹನುಮಪ್ಪ ತಿಪ್ಪಣ್ಣ ಹುಗ್ಗಿ, ಹೊಳೆಯಪ್ಪ ತಿಪ್ಪಣ್ಣ ಹುಗ್ಗಿ, ಮಾಳಪ್ಪ ಹೊಳೆಪ್ಪ ಹುಗ್ಗಿ, ಕನಕಪ್ಪ ತಿಪ್ಪಣ್ಣ ಹುಗ್ಗಿ, ದೇವಾನಂದ್ ಹೊಳೆಯಪ್ಪ ಹುಗ್ಗಿ ವಿರುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಕುಷ್ಟಗಿಯ ಸಿಪಿಐ ನಿಂಗಪ್ಪ ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this Article
error: Content is protected !!