ತಾವರಗೇರಾ: ಮರಿ ಚಿರತೆಯೊಂದು ಪ್ರತ್ಯಕ್ಷ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸಮೀಪದ ಗಾಣಗಿತ್ತಿ ಗುಡ್ಡದಲ್ಲಿ ಚಿರತೆ ಮರಿಯೊಂದು ಪ್ರತ್ಯಕ್ಷ ವಾಗಿದೆ.
ಅರಣ್ಯ ಇಲಾಖೆಯವರು ಚಿರತೆ ಮರಿ ಸೆರೆ ಹಿಡಿಯಲು ಗಾಣಗಿತ್ತಿ ಗುಡ್ಡದ ಪಕ್ಕದ ಜಮೀನೊಂದರಲ್ಲಿ ಬೋನ್ ಅಳವಡಿಸಿದ್ದಾರೆ. ಚಿರತೆ ಮರಿ ಯಾಗಿರುವದರಿಂದ ಸುತ್ತಮುತ್ತಲಿನ ರೈತರು ಭಯಪಡಬಾರದೆಂದು ಉಪವಲಯ ಅರಣ್ಯಧಿಕಾರಿ ರಿಯಾಜ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಶಂಕರಗೌಡ, ರೈತರಾದ ಸಂತೋಷ ಸರನಾಡಗೌಡರ ಸೇರಿದಂತೆ ಇಲಾಖೆ ಸಿಬ್ಬಂದಿ ಇದ್ದರು.
ಸದ್ಯ ಚಿರತೆ ಮರಿಯ ವೀಡಿಯೋಂದನ್ನು ಅಲ್ಲಿನ ರೈತರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

Share this Article
error: Content is protected !!