ತಾವರಗೇರಾ: ಸಿಡಿ ಲೇಡಿ ಪ್ರಕರಣ, ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವದಿಲ್ಲ – ಸತೀಶ್ ಜಾರಕಿಹೊಳಿ

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ : ಸಿಡಿ ಲೇಡಿ ಪ್ರಕರಣದಿಂದ ಕಾಂಗ್ರೇಸ್ ಮತ್ತು ಬಿಜೆಪಿ ಗೆ ಯಾವುದೆ ಪರಿಣಾಮ ಉಂಟಾಗುವುದಿಲ್ಲ. ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಬೆಳಗಾಂವಿ ಲೋಕಸಭಾ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ಗುರುವಾರದಂದು ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮೂರು ಕ್ಷೇತ್ರದಲ್ಲಿ ಕಾಂಗ್ರೇಸ್ ಗೆಲ್ಲುವುದು ಖಚಿತ. ತಾವೂ ಸಹ ಬೆಳಗಾಂವಿ ಲೋಕಸಭೆ ಉಪ ಚುನಾವಣೆಗೆ ಸ್ಪರ್ಧಿಸಿದ್ದು, ಪಕ್ಷದ ಗೆಲುವಿಗಾಗಿ ಮಸ್ಕಿ ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಬಂದಿದ್ದೇನೆ ನಮಗೆ ಚುನಾವಣೆಗಿಂತ ಪಕ್ಷದ ಗೆಲವು ಮುಖ್ಯ ಇದರಿಂದಾಗಿ ಮಸ್ಕಿಗೆ ಬಂದಿರುವೆನು.

ಇಂದೇ ಬಹಿರಂಗ ಪ್ರಚಾರಕ್ಕೆ ತೆರೆಬಿಳುವ ಹಿನ್ನಲೆಯಲ್ಲಿ ಒಂದು ದಿನದ ಮಟ್ಟಿಗೆ ಬಂದಿರುವೆ. ತಾವೂ ಚುನಾವಣೆಗೆ ನಿಲ್ಲದಿದ್ದರೆ ಮೂರು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತಿದ್ದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಮಾಜಿ ಸಚಿವ ಎಂ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಬಿ ವಿ ನಾಯಕ್, ಚೆಳ್ಳಿಕೇರಿ ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕಾಂಗ್ರೇಸ್ ಮುಖಂಡರಾದ ದೊಡ್ಡಬಸನಗೌಡ ಬಯ್ಯಾಪೂರ, ಬಸನಗೌಡ ಮಾಲಿ ಪಾಟೀಲ್, ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕರ್, ನಾರಾಯಣಗೌಡ ಮೆದಿಕೇರಿ, ಹನುಮೇಶ ನಾಯಕ, ಲಿಂಗರಾಜ ಹಂಚಿನಾಳ, ಆದೇಶ ನಾಯಕ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ನಂತರ ಪಟ್ಟಣದಿಂದಲೆ ಪುನಃ ಹೆಲಿಕಾಪ್ಟರ್ ಮೂಲಕ ಬೆಳಗಾವಿಗೆ ತೆರಳಿದರು.

Share this Article
error: Content is protected !!