ತಾವರಗೇರಾ: ರಸ್ತೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು

N Shameed
1 Min Read

ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸಮೀಪದ ಕುಡ್ಲೂರ ತೆಗ್ಗಿಹಾಳ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತ ಪಟ್ಟು ಮತ್ತೊಬ್ಬ ವ್ಯಕ್ತಿ ತೀವ್ರ ಗಾಯ ಗೊಂಡಿರುವ ಘಟನೆ ರವಿವಾರ ಮಧ್ಹ್ಯಾನ ನಡೆದಿದೆ.
ಮೃತ ವ್ಯಕ್ತಿಯನ್ನು ಲಿಂಗಸಗೂರ ತಾಲೂಕಿನ ಮರಳಿ ಗ್ರಾಮದ ಬಸವರಾಜ ತಿಮ್ಮಾಪೂರ ಕುರುಬರ, (27) ಮತ್ತು ಅದೇ ಗ್ರಾಮದ ಅಯ್ಯಪ್ಪ ಭೋದುರ ಕುರುಬರ (25) ಎಂಬುವವರಿಗೆ ಕಾಲು ಮುರಿದಿದ್ದು, ಹೆಚ್ಚಿನ ಚಿಕಿತ್ಸೆಗೆ ತಾವರಗೇರಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕುಷ್ಟಗಿಯಲ್ಲಿ ಎತ್ತುಗಳನ್ನು ಖರೀದಿ ಮಾಡಲು ಹೋಗಿ ತಮ್ಮ ಸ್ವಂತ ಊರು ಮರಳಿಗೆ ಬರುವಾಗ ಮುದೇನೂರ ಕಡೆಯಿಂದ ವೇಗವಾಗಿ ಬಂದ ಬುಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಬಸವರಾಜ ಸ್ಥಳದಲ್ಲೇ ಮೃತ ಪಟ್ಟಿದ್ದರೆ, ಹಿಂದೆ ಕುಳಿತಿದ್ದ ಅಯ್ಯಪ್ಪ ಭೋದುರ ಗಂಭೀರ ವಾಗಿ ಗಾಯಗೊಂಡಿದ್ದಾನೆ.
ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article
error: Content is protected !!