ತಾವರಗೇರಾ: ರೈತರ ಬಣಿವೆಗಳಿಗೆ ಬೆಂಕಿ ಅಪಾರ ನಷ್ಟ

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಮೀಪದಲ್ಲಿ ರೈತರು ಹಾಕಿದ ಬಣಿವೆಗಳಿಗೆ ಬೆಂಕಿ ತಗುಲಿ 5 ಬಣಿವೆಗಳು ಸುಟ್ಟು ಹೋದ ಘಟನೆ ಜರುಗಿದೆ. ರೈತರಿಗೆ ಅಪಾರ ನಷ್ಟ ಸಂಭವಿಸಿದ ಘಟನೆ ನಡೆದಿದೆ.
ಪಟ್ಟಣದ ರೈತರಾದ ಶೇಖಪ್ಪ ಬಾಲಪ್ಪ ಹೊಸಮನಿ ಅವರಿಗೆ ಸೇರಿದ 3 ಬಣಿವೆಗಳು ಹಾಗೂ ಶಿವಪ್ಪ ಮುದುಕಪ್ಪ ಡಂಕನಕಲ್ ಎಂಬುವವರಿಗೆ ಸೇರಿದ 2 ಬಣಿವೆಗಳು ಸುಟ್ಟು ಹೋಗಿವೆ.

ದನ- ಕರುಗಳಿಗೆ ಸಂಗ್ರಹಿಸಿಡಲಾಗಿದ್ದ ಶೆಂಗಾ, ಜೋಳದ ಹೊಟ್ಟು 5 ಬಣಿವೆಗಳು ಬೆಂಕಿಗಾಹುತಿ ಹೊಂದಿದ್ದು ವಿಷಯ ತಿಳಿಯುತ್ತಿದ್ದಂತೆ ಕೆಲ ಯುವಕರು ಬೆಂಕಿ ಆರಿಸಲು ಪ್ರಯತ್ನ ಪಟ್ಟರು ಕೂಡ ಸಾಧ್ಯವಾಗದೇ ರೈತರು ನಷ್ಟ ಅನಯಭವಿಸಿದ್ದು ಸರ್ಕಾರದಿಂದ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ ನಂತರ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

Share this Article
error: Content is protected !!