ಕುಷ್ಟಗಿ: ಪಂಚಮಸಾಲಿ ಸಮುದಾಯದಿಂದ ಮೀಸಲಾತಿಗೆ ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ; ಪಂಚಮಸಾಲಿ ಸಮುದಾಯಕ್ಕೆ 2 ಎ ಹಾಗೂ ಲಿಂಗಾಯತ ಬಡ ಸಮಾಜಕ್ಕೆ ಕೇಂದ್ರ ‌ಒ,ಬಿ,ಸಿ ‌ಮೀಸಲಾತಿಗಾಗಿ ಒತ್ತಾಯಿಸಿ ಪಂಚಮಸಾಲಿ ಸಮಾಜದವರು ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಿದರು.
ಶನಿವಾರದಂದು ಬಸವೇಶ್ವರ ವೃತ್ತದಿಂದ ತಹಶಿಲ್ದಾರರ ಕಚೇರಿ ಗೆ ಪಾದಯಾತ್ರೆ ಮೂಲಕ ತೆರಳಿ ಪಂಚಸೇನೆ ಹಿರಿಯ ಮುಖಂಡ ದೆವೇಂದ್ರಪ್ಪ ಬಳೂಟಗಿ ಅವರು ತಹಶಿಲ್ದಾರರ ಮ‌ೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಬದಲ್ಲಿ ಪಂಚಸೇನೆ ತಾಲೂಕ ಅಧ್ಯಕ್ಷ ವೀರೆಶ ನಾಲತವಾಡ ವಕೀಲರು, ಜಿಲ್ಲಾ ಪಂಚಸೇನೆ ಉಪಾಧ್ಯಕ್ಷರಾದ ಸಿ ಎನ್ ಉಪ್ಪಿನ್ ವಕೀಲರು, ಕಾರ್ಯದರ್ಶಿಗಳಾದ ದೊಡ್ಡ ಕಂದಗಲ್, ಸುರೇಶ್ ಕಾವಿ, ಕಾನೂನು ಘಟಕ ಅಧ್ಯಕ್ಷ ಎಸ್ ಜಿ ಪಾಟೀಲ್, ಬಿಎಮ್ ಕಮತಾರ, ಸೋಮನಾಥ, ಶಿವಪುತ್ರಪ್ಪ ಕುಕ್ಕುಂಪಳ್ಳಿ, ಹಾಗೂ ಸಮಾಜದ ನೂರಾರು ಮುಖಂಡರು ಉಪಸ್ಥಿತರಿದ್ದರು.

Share this Article
error: Content is protected !!