ರೈತರು ಹಾಗೂ ಅಧಿಕಾರಿಗಳೊಂದಿಗೆ ಪೇರಲ ಹಣ್ಣನ್ನು ತಿಂದು ಸರಳತೆ ಮೆರೆದ ಸಚಿವ ಆರ್ ಶಂಕರ್

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣಕ್ಕೆ ಆಗಮಿಸಿದ್ದ ತೋಟಗಾರಿಕೆ ಸಚಿವ ಆರ್ ಶಂಕರ್ ಅವರು ರೈತರ ತೋಟಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾವು ಕೂಡ ರೈತರೊಂದಿಗೆ ಬೆರೆತು ಇಲ್ಲಿಯ ಅಂಬಣ್ಣ ಕಂದಗಲ್ ಅವರ ತೋಟಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸರಳತೆ ಮೆರೆದು ತಾವೇ ತೋಟದಲ್ಲಿಯ ಪೇರಲ ಹಣ್ಣಿನ ರುಚಿ ಸವಿದಿರುವುದು ಅಲ್ಲಿ ನೆರೆದಿದ್ದ ರೈತರಿಗೂ ಹಾಗೂ ಸಾರ್ವಜನಿಕರಿಗೂ ಆಶ್ಚರ್ಯದ ಜೊತೆಗೆ ಸಚಿವರ ಸರಳ ಸಜ್ಜನಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಇಲಾಖೆ ಅಧಿಕಾರಿಗಳೊಂದಿಗೆ ತಮ್ಮ ಕುಟುಂಬದ ಸದಸ್ಯರಂತೆ ಇಲಾಖೆಯ ಬಗ್ಗೆ ಮಾಹಿತಿ ಪಡೆಯುತ್ತಿರುವುದು ಕೂಡ ಎಲ್ಲರ ಗಮನ ಸೆಳೆಯಿತು.

ನಂತರ ಇಲ್ಲಿಯ ನಂದಿ ಆಗ್ರೋ ಫಾರಂ ಹೌಸ ನ ರೈತ ಬಸಯ್ಯ ಹಿರೇಮಠ ಅವರು ನುಗ್ಗೆ ಸೊಪ್ಪಿನಿಂದ ತಯಾರಿಸಿದ ಮಾತ್ರೆಗಳನ್ನು ಖರೀದಿ ಮಾಡಿಕೊಂಡರು ನಂತರ ಅಂಬಣ್ಣ ಕಂದಗಲ್ ಅವರ ಪೇರಲ ತೋಟಕ್ಕೆ ತೆರಳಿ ಪೇರಲ ತಳಿ ಹಾಗೂ ಮಾರುಕಟ್ಟೆ ಯ ಬಗ್ಗೆ ಚರ್ಚಿಸಿದ್ದು ವಿಶೇಷವಾಗಿತ್ತು.

Share this Article
error: Content is protected !!