ತಾವರಗೇರಾ: ಕರಡಿ ದಾಳಿ ಅಪಾರ ನಷ್ಟ

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಹತ್ತಿರವಿರುವ ರೈತರ ತೋಟಗಳಿಗೆ ಕರಡಿ ದಾಳಿ ಮಾಡಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ನಡೆದಿದೆ.

ಪಟ್ಟಣದ ರೈತರಾದ ಅಮರೇಶ ಚಲುವಾದಿ ಹಾಗೂ ಸಾಬೀರ ಪಾಷಾ ಮುಲ್ಲ ಎಂಬುವವರಿಗೆ ಸೇರಿದ ಕಲ್ಲಂಗಡಿ ಹಾಗೂ ಪಪ್ಪಾಯಿ ತೋಟಗಳಿಗೆ ಕರಡಿ ದಾಳಿ ನಡೆಸಿ ಕಲ್ಲಂಗಡಿ ಹಣ್ಣುಗಳನ್ನು ತಿಂದು ಮತ್ತು ಪಪ್ಪಾಯಿ ಗಿಡಗಳನ್ನು ನಾಶಪಡಿಸಿದ್ದು ಇದರಿಂದ ರೈತರಿಗೆ ಅಪಾರ ನಷ್ಟ ಸಂಭವಿಸಿದೆ, ಸದ್ಯ ಮಾರುಕಟ್ಟೆಗೆ ಮಾರಾಟವಾಗುವ ಹಣ್ಣುಗಳು ಕರಡಿ ಪಾಲಾಗಿದ್ದು ರೈತರು ಬೆಳೆದ ಬೆಳೆಯು ಕೈಗೆ ಬರದೇ ಕರಡಿಯ ಪಾಲಾಗಿದೆ.

ರೈತರು ಲಕ್ಷಾನುಗಟ್ಟಲೇ ಖರ್ಚು ಮಾಡಿ ಬೆಳೆದ ಬೆಳೆಗೆ ರಕ್ಷಣೆ ಇಲ್ಲದಂತಾಗಿದ್ದು ಆದ್ದರಿಂದ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಕರಡಿ ದಾಳಿಯನ್ನು ತಪ್ಪಿಸಬೇಕು ಇಲ್ಲದಿದ್ದಲ್ಲಿ ಇನ್ನು ಹೆಚ್ಚಿನ ನಷ್ಟ ಸಂಭವಿಸುತ್ತದೆ ಆದ್ದರಿಂದ ರೈತರ ಬೆಳೆ ರಕ್ಷಿಸಲು ಅರಣ್ಯ ಇಲಾಖೆ ಮುಂದೆ ಬರಬೇಕೆಂದು ರೈತರು ಆಗ್ರಹಿಸಿದ್ದಾರೆ.

Share this Article
error: Content is protected !!