ತಾವರಗೇರಾ: ಆಕಸ್ಮಿಕ ಬೆಂಕಿ 3 ಬಣಿವೆ ಭಸ್ಮ

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ : ಪಟ್ಟಣದ  ಹೊರವಲಯದ ಸಿಂಧನೂರ ರಸ್ತೆಯಲ್ಲಿ ಬರುವ ರುದ್ರಭೂಮಿ ಪಕ್ಕದಲ್ಲಿ ಹಾಕಲಾಗಿದ್ದ 3 ಬಣಿವೆ ಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ರೈತ ಸೋಮನಗೌಡ ಓಲಿ ಅವರಿಗೆ ಸೇರಿದ 3 ಬಣಿವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಬಸ್ಮವಾಗಿದ್ದು ಅಪಾರ ನಷ್ಟ ಸಂಭವಿಸಿದೆ, ಒಟ್ಟು ನೆಲ್ಲಿನ ಹುಲ್ಲು, ಬೀಳಿ ಜೋಳ ಹಾಗೂ ಹೊಟ್ಟು ಸಂಗ್ರಹಿಸಿಡಲಾಗಿದ್ದ ಬಡ ರೈತನ ಕುಟುಂಬದವರಿಗೆ ತೀವ್ರ ನಷ್ಟವಾಗಿದ್ದು ಸರ್ಕಾರ ಪರಿಹಾರ ನೀಡವಂತೆ ರೈತ ಕುಟುಂಬ ಹಾಗೂ ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.
ಈ ಸಂಧರ್ಬದಲ್ಲಿ ಕಂದಾಯ ಇಲಾಖೆಯ ಸೂರ್ಯಕಾಂತ ಮಸ್ಕಿ ಹಾಗೂ ಸಿಬ್ಬಂದಿ, ಪೋಲೀಸ್ ಇಲಾಖೆ ಮುಖ್ಯ ಪೇದೆ ಶಿವಪುತ್ರಪ್ಪ, ಮುಖಂಡರಾದ ಅಮರೇಶ ಗಾಂಜಿ, ಫಯಾಜ ಬನ್ನು ಭೆಟ್ಟಿ ನೀಡಿ ಪರಿಶೀಲಿಸಿ ಪಂಚ ನಾಮ ಮಾಡಿದ್ದಾರೆ.

Share this Article
error: Content is protected !!