ತಾವರಗೇರಾ ಕ್ಕೂ ವಕ್ಕರಿಸಿದ ಸರಗಳ್ಳರು, ಆತಂಕದಲ್ಲಿ ಪಟ್ಟಣದ ಜನರು

N Shameed
0 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ : ಪಟ್ಟಣದಲ್ಲಿ ಪ್ರಥಮಬಾರಿಗೆ ಸರಗಳ್ಳತನ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದ್ದು, ಜನರು ಭಯಭೀತಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ಪಟ್ಟಣದ ವರ್ತಕರಾದ ಆಶಾ ಪ್ರಾಣೇಶ ದರೋಜಿಯವರು  ದಿನ ನಿತ್ಯದಂತೆ ತಮ್ಮ ಕಿರಾಣಿ ಅಂಗಡಿಯಿಂದ ಮನೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಸೈಕಲ್ ಮೋಟಾರ್ ಮೇಲೆ ಬಂದಿದ್ದ ಇಬ್ಬರು ವ್ಯಕ್ತಿಗಳು ವಿಳಾಸ ಕೇಳುವ ನೆಪದಲ್ಲಿ ಕೊರಳಿನಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆೆ. ಈ ಕುರಿತಂತೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಕೆ ಮುಂದುವರೆದಿದೆ. ಪಟ್ಟಣದಲ್ಲಿ ಈ ರೀತಿಯ ಸರಗಳ್ಳತನ ನಡೆದಿರುವುದು ಪಟ್ಟಣದ ಜನರು ಆತಂಕಗೊಂಡಿದ್ದಾರೆ.

Share this Article
error: Content is protected !!