ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾ ಪಂಚಾಯತ ಸದಸ್ಯ ಕೆ ಮಹೇಶ್ ಚಾಲನೆ

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ : ಕ್ರಿಕೇಟ್, ವಾಲಿಬಾಲ್, ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸುವದರಿಂದ ಗ್ರಾಮದಲ್ಲಿ ಸೌಹಾರ್ದತೆ ಬೆಳೆಯುತ್ತಿದೆ ಮತ್ತು ಕ್ರೀಡೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಜಿಪಂ ಸದಸ್ಯ ಕೆ ಮಹೇಶ ಹೇಳಿದರು.
ಸಮೀಪದ ನವಲಹಳ್ಳಿ ಗ್ರಾಮದ ಭಗತ್‌ಸಿಂಗ್ ಕ್ರೀಡಾ ಮತ್ತು ಗ್ರಾಮೀಣಾಭೀವೃದ್ಧಿ ಯುವಕ ಸಂಘದವರು ಇತ್ತೀಚಿಗೆ ಏರ್ಪಡಿಸಿದ್ದ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಭಾಗವಹಿಸಿವುದು ಮುಖ್ಯ, ಸೋಲು, ಗೆಲವುಗಳನ್ನು ಸಮಾನವಾಗಿ ಸ್ವೀಕರಸಬೇಕು ಎಂದು ಹೇಳಿದರು.
ಸಂಗಪ್ಪ ಕಡೆಕೊಪ್ಪ, ಶರಣಪ್ಪ ಬುಕ್ಕಣ್ಣವರ, ಮಲ್ಲಪ್ಪ ಬಂಡೆರ್, ಶರಣಪ್ಪ ಗುರಿಕಾರ, ಶರಣಪ್ಪ ಮಾದಿನೂರು, ದೊಡ್ಡಬಸವ ಪಾಟೀಲ್, ತಿಮ್ಮಣ್ಣ ಕುರನಾಳ, ಮಲ್ಲಿಕಾರ್ಜುನ ಬಂಡೇರ್ ಸೇರಿದಂತೆ ಗ್ರಾಮದ ಗಣ್ಯರು ಮತ್ತು ಯುವಕರು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.

Share this Article
error: Content is protected !!