ಕುಷ್ಟಗಿ- ಮೇಜರ ಸಂದೀಪ ಉಣ್ಣಿಕೃಷ್ಣನ್ ರ ನಾಮಫಲಕ ಹಾನಿ, ಮಾಜಿ ಸೈನಿಕರ ಆಕ್ರೋಶ

N Shameed
1 Min Read

 

ವರದಿ: ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:  ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿರುವ ಮೇಜರ್ ಶ್ರೀ ಸಂದೀಪ ಉಣ್ಣಿಕೃಷ್ಣನ್ ನಗರದ ನಾಮಫಲಕವನ್ನು ದುಷ್ಕರ್ಮಿಗಳು ಪದೇ ಪದೇ ಕಿತ್ತು ಬಿಸಾಕುತ್ತಿದ್ದಾರೆ, ನಾವು ದೇಶಕ್ಕಾಗಿ ಪ್ರಾಣವನ್ನೆ ಪಣಕ್ಕಿಟ್ಟು ಹೋರಾಡಿ ಸಾವನ್ನಪ್ಪಿದ ಇವರ ಸವಿನೆನಪಿಗಾಗಿ “ ಮೇಜರ್ ಸಂದೀಪ ಉಣ್ಣಿಕೃಷ್ಣನ್ ನಗರ ” ವೆಂದು ಮೂಲದಿಂದಲೇ ನಾಮಫಲಕವನ್ನು ಹಾಕಿರುತ್ತೆವೆ, ಇನ್ನೂ ಮುಂದೆಯಾದರು ಯಾವುದೇ ರೀತಿಯಿಂದ ಇಂತಹ ಕೃತ್ಯವನ್ನು ವೆಸಗದಂತೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ಸಂಬಧಪಟ್ಟ ಅಧಿಕಾರಿಗಳು ಮರು ನಾಮಫಲಕವನ್ನು ಹಾಕಿಸಿಕೊಡಬೇಕು ಎಂದು ಕೋರಿ ಪಟ್ಟಣದ ಮಾಜಿ ಸೈನಿಕ್ ಸಂಘದ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂಧರ್ಬದಲ್ಲಿ ಮಾಜಿ ಸೈನಿಕ ಸಂಘದ ತಾಲೂಕ ಅಧ್ಯಕ್ಷ ಹಂಪನಗೌಡ ಬಳೂಟಗಿ, ಮಾಜಿ ಸೈನಿಕರಾದ ಶರಣಯ್ಯ, ಭೀಮನಗೌಡ, ಯಲ್ಲಪ್ಪ, ಎಲ್ ಎಸ್ ರಾಠೋಡ, ಮಹ್ಮದ ರಫೀ, ಶಿವಸಂಗಪ್ಪ, ಸುಭಾನ, ಬಸನಗೌಡ ಉಪಸ್ಥಿತರಿದ್ದರು.

Share this Article
error: Content is protected !!