ತಾವರಗೇರಾ ಪಟ್ಟಣದಲ್ಲಿ ಬೆಳಗಿನ ಜಾವ ‘ನರಿ’ ಪ್ರತ್ಯಕ್ಷ

N Shameed
1 Min Read

 

 

ಎನ್ ಶಾಮೀದ್ ತಾವರಗೇರಾ

ತಾವರಗೇರಾ : ಪಟ್ಟಣದ ಅಯ್ಯೂಬ್ ಖಾನ್ ಪಠಾಣ್ ರವರ ಮನೆಯ ಬಳಿ ಬೆಳಗಿನ ಜಾವ ನರಿಯೊಂದು ಬಂದಿರುವ ಘಟನೆ ಜರುಗಿದೆ.
ಇತ್ತಿಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ಆಗಾಗ ಊರೊಳಗೆ ಪ್ರವೇಶ ಮಾಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.

 

ಅದರಂತೆ ಇಂದು ಬೆಳಗಿನ ಜಾವ ಶ್ರೀಶ್ಯಾಮೀದ್ ಅಲಿ ದರ್ಗಾದ ಹತ್ತಿರ ಇರುವ ಅಯ್ಯೂಬ್ ಖಾನ್ ಪಠಾಣ್ ಅವರ ಮನೆಯ ಮುಂದೆ ನರಿಯೊಂದು ಬಂದಿದೆ. ಅದನ್ನು ನೋಡಿದ ಸ್ಥಳಿಯರು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದಾರೆ. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ರಿಯಾಜ್, ಶಂಕರಗೌಡ, ಹುಸೇನಸಾಬ, ಲಕ್ಷ್ಮಣ ನರಿಯನ್ನು ಹಿಡಿದು ಕೊಂಡು ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ.

Share this Article
error: Content is protected !!