ಅಯೋಧ್ಯಯ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಧೇಣಿಗೆ ಸಂಗ್ರಹ

N Shameed
1 Min Read

ಎನ್ ಶಾಮೀದ್ ತಾವರಗೇರಾ

ತಾವರಗೇರಾ :   ಪಟ್ಟಣದ ಶ್ರೀ ರಾಮಮಂದಿರ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ಶ್ರೀ ರಾಮ ಮಂದಿರ ದೇಗುಲ ನಿರ್ಮಾಣದ ಅಂಗವಾಗಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಬಿಜೆಪಿ ಮುಖಂಡ ಚಂದ್ರಶೇಖರ ನಾಲತವಾಡ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ರಾಮ ಮಂದಿರ ನಿರ್ಮಾಣದ ಪ್ರತಿಯೊಬ್ಬರ ಭಾರತೀಯರ ಕನಸನ್ನು ಕೇಂದ್ರ ಸರ್ಕಾರ ನನಸಾಗಿಸಿದೆ, ಮಂದಿರ ನಿರ್ಮಾಣದ ಕಾರ್ಯದಲ್ಲಿ ಪ್ರತಿಯೊಬ್ಬರೂ ಸೇವೆಮಾಡಲು ಸಿದ್ದರಾಗಬೇಕು ಎಂದು ಹೇಳಿದರು.

ಈ ಸಂಧರ್ಬದಲ್ಲಿ ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕರ್, ಸದಸ್ಯರಾದ ವಿರೇಶ ಭೋವಿ, ಚನ್ನಪ್ಪ ಸಜ್ಜನ, ಮಾಜಿ ಗ್ರಾಪಂ ಅಧ್ಯಕ್ಷ ವೀರಭದ್ರಪ್ಪ ನಾಲತವಾಡ, ಮುಖಂಡರಾದ ಮಂಜುನಾಥ ಜೂಲಕುಂಟಿ, ಶಂಭನಗೌಡ ಪಾಟೀಲ್, ಶ್ಯಾಮೂರ್ತಿ ಅಂಚಿ, ಸಿದ್ದನಗೌಡ ಪುಂಡಗೌಡ್ರ, ಪ್ರದಿಪ ಪುಡೂರ, ವೆಂಕಟೇಶ ಯಾದವ ಮತ್ತಿತರರಿದ್ದರು.

Share this Article
error: Content is protected !!