ಮಧ್ಯ ರಾತ್ರಿಯಲ್ಲಿ  ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ಹೂಲಗೇರಿ…

Nagaraj M
1 Min Read
 ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಪಟ್ಟಣದ ರಾಮಲಿಂಗೇಶ್ವರ  ಕಾಲೋನಿಯ   ಯುವಕನೋರ್ವ ರಾತ್ರಿ 11ಗಂಟೆಯ ಸುಮಾರಿಗೆ  ದ್ವಿಚಕ್ರ ವಾಹನದ ಮೇಲಿಂದ ಬಿದ್ದು  ಅಪಘಾತವಾಗಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಾಗ ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯದ ಮೇಲಿದ್ದ  ವೈದ್ಯರು ಇಲ್ಲದೆ ಇರುವುದರಿಂದ  ಗಾಯಾಳುವಿಗೆ  ಆಸ್ಪತ್ರೆ ಸಿಬ್ಬಂದಿಗಳು ಕೂಡ ಸರಿಯಾದ ರೀತಿಯಲ್ಲಿ ಸ್ಪಂದನೆ ನೀಡದ  ಕಾರಣ ಸಾರ್ವಜನಿಕರೊಬ್ಬರು
ಮಧ್ಯ ರಾತ್ರಿ 12ಗಂಟೆಯ ಸುಮಾರಿಗೆ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ರವರಿಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸಿದ್ದಾರೆ ಶಾಸಕ ಮಧ್ಯರಾತ್ರಿಯು ಕೂಡ ಜನರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗೆ ಪರಿಹಾರ ದೊರಕಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗುವ  ಮೂಲಕ ತಾವೊಬ್ಬ ಸರಳ ಸಜ್ಜನಿಕೆ ರಾಜಕಾರಣಿ ಎನ್ನುವುದನ್ನು ನಿರೂಪಿಸಿದ್ದಾರೆ ಎನ್ನುವ ಮಾತುಗಳು ಸಾರ್ವಜನಿಕವಲಯದಲ್ಲಿ ಕೇಳಿಬರುತ್ತಿವೆ.
Share this Article
error: Content is protected !!