ತಾವರಗೇರಾ: ಶ್ರೀ ಕನಕದಾಸ ಜಯಂತಿ, ಅದ್ದೂರಿ ಮೆರವಣಿಗೆ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಪಟ್ಟಣದಲ್ಲಿ ಹಾಲುಮತ ಸಮಾಜದವರಿಂದ ಶ್ರೀ ಕನಕದಾಸ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕನಕದಾಸ ವೃತ್ತದಲ್ಲಿರುವ ಭಕ್ತ ಕನಕದಾಸ ಪ್ರತಿಮೆ ಗೆ ಶಾಸಕ ದೊಡ್ಡನಗೌಡ ಪಾಟೀಲ ಹೂವಿನ ಹಾರ ಹಾಕುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡಬಸವ ಬಯ್ಯಾಪುರ, ಶೇಖರಗೌಡ ಪೊಲೀಸ್ ಪಾಟೀಲ, ಕೆ. ಮಹೇಶ, ಸೇರಿದಂತೆ ಹಾಲುಮತ ಸಮಾಜದ ಮುಖಂಡರು ಯುವಕರು ಉಪಸ್ಥಿತರಿದ್ದರು.

ನಂತರ ಪಟ್ಟಣದ ಪ್ರಮುಖ ವೃತ್ತಗಳ ಮೂಲಕ ಮೆರವಣಿಗೆ ಅದ್ದೂರಿಯಾಗಿ ಸಾಗಿತು. ಮಹಿಳೆಯರು ಕುಂಬ ಕಳಸ ದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು,
ಮೆರವಣಿಗೆಯು ಪಟ್ಟಣದ ವಿವಿಧ ವೃತ್ತಗಳಲ್ಲಿ ಸಂಚರಿಸಿ ಪುನಃ ಕನಕದಾಸ ವೃತ್ತದಲ್ಲಿ ಕೊನೆಗೊಂಡಿತು.

Share this Article
error: Content is protected !!