ಕೃಷಿ ಅಧಿಕಾರಿ ನನ್ನ ಗಂಡನನ್ನು ಹುಡುಕಿ ಕೊಡಿ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಯಾಗಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಕೊಂಡಗೇರಿ (37) ವರ್ಷ ಡಿಸೆಂಬರ್ 1 ರಂದು ನಾಪತ್ತೆಯಾಗಿದ್ದು ಆತನ ಪತ್ನಿ ವಿದ್ಯಾ ಶ್ರೀ ತನ್ನ ಪತಿಯನ್ನು ಹುಡುಕಿ ಕೊಡುವಂತೆ ಸ್ಥಳೀಯ ಠಾಣೆಗೆ ದೂರು ನೀಡಿದ್ದು, ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಈ ಕುರಿತು ದೂರಿನಲ್ಲಿ ತನ್ನ ಪತಿಯು ಡಿಸೆಂಬರ್ 1 ರಂದು ಕಚೇರಿ ಕೆಲಸಕ್ಕೆಂದು ತೆರಳಿದ ಮೇಲೆ ತಮ್ಮ ಸ್ನೇಹಿತರ ಬೈಕ್ ಮೇಲೆ ಹೋಗಿದ್ದು ನಂತರ ಬಸ್ ನಿಲ್ದಾಣದ ಹತ್ತಿರ ಇಳಿದುಕೊಂಡ ನಂತರ ನಾಪತ್ತೆಯಾಗಿದ್ದು ಪತಿಯನ್ನು ಹುಡುಕಿ ಕೊಡುವಂತೆ ಠಾಣೆಯಲ್ಲಿ ದೂರು ನೀಡಿದ್ದು, ಪತಿ ಪತ್ತೆಯಾದಲ್ಲಿ ಸ್ಥಳೀಯ ಠಾಣೆಗೆ ತಿಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Share this Article
error: Content is protected !!