ಬೈಕ್ ಗೆ ಬಸ್ ಡಿಕ್ಕಿ, ಸ್ಥಳದಲ್ಲೇ ಬೇಕರಿ ಮಾಲಿಕ ಸಾವು…!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಗಂಗಾವತಿ: ಸ್ಥಳೀಯ ಲಕ್ಷ್ಮಿ ಕ್ಯಾಂಪ್ ನ ತಾಯಮ್ಮ ಗುಡಿ ಹತ್ತಿರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಮೃತ ಪಟ್ಟ ಯುವಕನನ್ನು ಬೃಂದಾವನ ಹೋಟೆಲ್ ಪಕ್ಕದ ಎಸ್ ಎಲ್ ವಿ ಅಯ್ಯಂಗಾರ್ ಬೇಕರಿಯ ಶಿವಶಂಕರ (30) ಎಂದು ಗುರುತಿಸಲಾಗಿದೆ.
ಪೆಟ್ರೋಲ್ ಹಾಕಿಸಿಕೊಂಡು ಬರಲು ಜುಲೈನಗರಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಗಂಗಾವತಿ ಯಿಂದ ವಿಜಯಪುರ ಕ್ಕೆ ತೆರಳುತ್ತಿದ್ದ ksrtc ಬಸ್ ಡಿಕ್ಕಿ ಹೊಡೆದ ಪರುಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೂಲತಃ ಹಾಸನದವರಾದ ಶಿವಶಂಕರ ಕಳೇದ ಹಲವಾರು ವರ್ಷಗಳಿಂದ ಗಂಗಾವತಿಯಲ್ಲೆ ನೆಲೆಸಿದ್ದರು.
ಈ ಕುರಿತು ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article
error: Content is protected !!